ಗಣಪತಿ ದೇಗುಲದಲ್ಲಿ `ಕೃಷ್ಣ ರುಕ್ಕು` ಚಿತ್ರದ ಮುಹೂರ್ತ ಸಮಾರಂಭ
Posted date: 19 Wed, Aug 2015 – 04:50:17 PM

ಶ್ರೀವೆಂಕಟೇಶ್ವರ ಕೃಪ ಎಂಟರಟೈನರ್ ಅರ್ಪಿಸುವ, ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರುವ ಹಾಗೂ ವಾಸವಿ ಮೆಹ್ತಾ ಅವರ ಸಹ ನಿರ್ಮಾಣವಿರುವ  ‘ಕೃಷ್ಣ ರುಕ್ಕು‘ ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.  ಚಿತ್ರತಂಡದ ಸದಸ್ಯರು ಹಾಗೂ ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಅಜಯ್‌ರಾವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶೋಭ್‌ರಾಜ್, ಗಿರಿಜಾಲೋಕೇಶ್, ಲೇಖಾ ಚಂದ್ರ, ಸಿದ್ಧಾರ್ಥ್ ಮಾದ್ಯಮಿಕ, ವಿಜಯ್ ಚಂಡೂರ್, ರಿತೇಶ್, ಸಿದ್ದು, ಲಕ್ಷ್ಮೀ ಸಿದ್ದಯ್ಯ, ಸ್ವಪ್ನರಾಜ್, ಭೂಪಾಲ್, ಪವನ್ ಅನಿಲ್‌ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed